ಕಟೀಲು ಆರು ಮೇಳಗಳ ತಿರುಗಾಟ ಆರಂಭ
ಲೇಖಕರು : ಪ್ರಜಾವಾಣಿ
ಗುರುವಾರ, ನವ೦ಬರ್ 19 , 2015
|
ನವ೦ಬರ್ 19, 2015
|
ಕಟೀಲು ಆರು ಮೇಳಗಳ ತಿರುಗಾಟ ಆರಂಭ
ಕಟೀಲು :
ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇಗುಲದ ಆರು ಮೇಳಗಳ ತಿರುಗಾಟಕ್ಕೆ ಬುಧವಾರ ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಪ್ರತಿ ಮೇಳದ ತಲಾ ಎರಡು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಚಾಲನೆ ನೀಡಿದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾ ದೇವಿ ಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಕುಮಾರ ಆಸ್ರಣ್ಣ, ತಂತ್ರಿಗಳಾದ ವೇದವ್ಯಾಸ ತಂತ್ರಿ, ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಬಲಿಪ ನಾರಾಯಣ ಭಾಗವತ, ಉದ್ಯಮಿ ಮರವೂರು ಜಗದೀಶ ಶೆಟ್ಟಿ, ಹರಿಕೃಷ್ಣ ಪುನರೂರು, ವೇದವ್ಯಾಸ ಉಡುಪ, ಭುವನಾಭಿರಾಮ ಉಡುಪ, ಮೋಹನ್ ಮೆಂಡನ್, ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಬಂಧಕ ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮೇಳ ಹೊರಡುವ ದಿನ ಬೆಳಗ್ಗೆ ದೇವರ ಪೂಜಾ ಕಿರೀಟಗಳ ಪ್ರತಿಷ್ಠೆ, ಸಾಯಂಕಾಲ ಪ್ರತಿ ಮೇಳದ ಭಾಗವತರಿಂದ ದೇಗುಲದಲ್ಲಿ ಪ್ರತ್ಯೇಕ ಪ್ರತ್ಯೇಕ ಗಣಪತಿ ಸ್ತುತಿ, ದುರ್ಗಾಸುತ್ತಿ, ದೇವರ ಎದುರು ಭಾಗವತರಿಗೆ ಕಲಾವಿದರಿಗೆ ಸೀರೆ ಪ್ರಸಾದ ನೀಡುವುದು, ದೇವರ ಪೂಜೆ, ದೇವರ ಪ್ರಸಾದ ಹಾಕಿ ಅರ್ಚಕರಾದ ಆಸ್ರಣ್ಣರು ಭಾಗವತರಿಗೆ ಜಾಗಟೆ ನೀಡಿದ ಬಳಿಕ, ಮೇಳದ ತಲಾ ಎರಡು ಕಲಾವಿದರಿಗೆ ಗೆಜ್ಜೆ ನೀಡಲಾಯಿತು, ಕಲಾವಿದರು ಗೆಜ್ಜೆ ಕಟ್ಟಿ ದೇವರ ಎದುರು ಕುಣಿದು, ಮೇಳದ ಗಣಪತಿ ದೇವರ ಎದುರು, ಬಳಿಕ ಚೌಕಿ ಪೂಜೆ ನಡೆದು ಆರಂಭದಲ್ಲಿ ಎಲ್ಲ ಆರು ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ಪ್ರತ್ಯೇಕ ಕುಣಿದು, ಪೀಠಿಕೆ ವೇಷದ ಬಳಿಕ ಒಂದೇ ರಂಗಸ್ಥಳದಲ್ಲಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ನಡೆಯಿತು.
ಕೃಪೆ :
udayavani
|
|
|